Posts

Showing posts from April, 2021

ಕಾಲು ಕಟ್ಟಿದ ಆನೆ:

ಕಾಲು ಕಟ್ಟಿದ ಆನೆ:  ಇಂ ಗ್ಲೀಷ್ ನಿಂದ ಕನ್ನಡಕ್ಕೆ‌ ಅನುವಾದ. ಲೇಖನ: ಅಮಿತ ಕುಲಕರ್ಣಿ 9972591014 ದೂರದ ಒಂದು ಕ್ಯಾಂಪಿನಲ್ಲಿ (ತಾಂಡಾದಲ್ಲಿ) ಕೆಲವು ಆನೆಗಳನ್ನು ಚಿಕ್ಕ ಸರಪಳಿಯ ಮೂಲಕ ಕಟ್ಟಿ ಸಾಕಿದ್ದರು. ಒಬ್ಬ ದಾರಿ ಹೋಕ, ಎಲ್ಲ ಆನೆಗಳನ್ನು ಗಮನಿಸುತ್ತ ನಿಂತುಕೊಂಡು ವಿಚಾರ ಮಾಡ ತೊಡಗಿದ, "ಅಲ್ಲಾ !! ಆನೆಯನ್ನು ದೊಡ್ಡ ಬೋನಿನಲ್ಲಿ (ಪಂಜರದಲ್ಲಿ) ಯಾಕೆ ಇಟ್ಟಿಲ್ಲಾ, ಯಾಕೆ ತೆರೆದ ಪ್ರಾಂಗಣದಲ್ಲಿ ಚಿಕ್ಕ ಸರಪಳಿಯಲ್ಲಿ ಕಟ್ಟಿದ್ದಾರೆ? ಎಂಬ ಪ್ರಶ್ನೆ ತೀವ್ರವಾಗಿ ಕಾಡತೊಡಗೊತು, ಮತ್ತು ಆನೆಗಳು ಏಕೆ ಬಿಡಿಸಿಕೊಳ್ಳಲು ಪ್ರಯತ್ನ ಮಾಡುತ್ತಿಲ್ಲ, ಎಂಬ ಎರಡನೇ ಪ್ರಶ್ನೆ ಕಾಡತೊಡಗಿತು. ಆತಾ ದೂರದಲ್ಲಿದ್ದ ಒಬ್ಬ ಮಾವುತನನ್ನು ಕೇಳಲು ಮುಂದಾದನು. "ಹೇ, ಮಾವುತ ರಾಜಾ, ಏನಿದು ರಹಸ್ಯ ಯಾಕೆ ತೆರೆದ ಪ್ರಾಂಗಣದಲ್ಲಿ ಚಿಕ್ಕ ಸರಪಳಿಯಲ್ಲಿ ಕಟ್ಟಿದ್ದೀರಾ? ಅವುಗಳು ಬಿಡಿಸಿಕೊಂಡು ಓಡಲು ಪ್ರಯತ್ನ ಮಾಡಬಹುದಲ್ಲ. ಚಿಕ್ಕ ಸರಪಳಿಯನ್ನು ಬಿಡಿಸಿಕೊಳ್ಳಲು ಎಷ್ಟು ಹೊತ್ತು ಬೇಕು... ಅದರಿಂದ ಪ್ರಾಣಾಪಾಯ ವಾದರೆ? ಎಂದು ಉದ್ಗಾರ ತೆಗೆದ ದಾರಿ ಹೋಕ. ಮಾವುತ ಹೇಳಿದ, " ನೋಡಿ, ಅವುಗಳನ್ನು ನಾವು ಚಿಕ್ಕದಿರುವಾಗಲೇ, ಅದೇ ಚಿಕ್ಕ ಸರಪಳಿಯಿಂದ ಕಟ್ಟಿರುತ್ತೇವೆ, ಮತ್ತು ಆ ಸರಪಳಿ ಸಾಕು ಆ ವಯಸ್ಸಿಗೆ, ಬೆಳೆಯುತ್ತ ಬೆಳೆಯುತ್ತ ಅವು ಮಾನಸಿಕವಾಗಿ ಆ ನಂಬಿಕೆಯನ್ನು ದೃಢ ಮಾಡಿಕೊಳ್ಳುತ್ತವೆ. *"ನಮಗೆ ಈ‌ ಸರಪಳಿಯಿಂದ ತಪ್ಪಿಸಿಕೊಳ್...

ಶಗಣಿ ತಿನ್ನು ಕೆಲಸ ಮಾಡಿದ್ಯಾ...

ಶಗಣಿ ತಿನ್ನು ಕೆಲಸ ಮಾಡಿದ್ಯಾ... ಲೇಖನ: ಅಮೀತ ಕುಲಕರ್ಣಿ ೯೯೭೨೫೯೧೦೧೪ ಭಾರಿ ಸ್ವಾರಸ್ಯಕರ ವಿಚಾರ ನಿಮ್ಮ ಜೊಡಿ ಹಂಚ್ಕೊಳಾಕತ್ತಿನಿ. ಶೀರ್ಷಿಕೆ ಖತರ್ನಾಕ ಐತಿ, ತಪ್ಪ ತಿಳಿಬ್ಯಾಡ್ರಿ, ಶಗಣಿ ಅಂದ್ರ ನ ಆಧ್ಯಾತ್ಮ. ಶಗಣಿ ಇದ್ರ ನಮ್ಮ ಬದುಕು ಹಸನ, ನೆಮ್ಮದಿ, ಆರೋಗ್ಯ ಸದೃಢ. ಭಾಳ ಇಂಟ್ರೆಸ್ಟಿಂಗ ಐತ್ರಿ, ಪೂರ್ತಿ ಓದ್ರಿ ಮತ್ತ.... ಯಾಕ ನಮ್ಮ ಹಿರಿಯರು ಹಿಂಗ ನಮಗ ಬೈತಿದ್ರು... ದೊಡ್ಡ ತಪ್ಪ ಮಾಡಿದ್ರ ಬೈತಿದ್ರು, "ಶಗಣಿ ತಿನ್ನು ಕೆಲಸಾ ಮಾಡಿದ್ಯಾ"... ನಾನಂತು ಬೈಸಿಕೊಂಡಿನಿ... ಗಣಿತ ವಿಷಯ ಫೇಲ ಆದಾಗ ನಮ್ಮ ಅಪ್ಪಾ ಬೈದಿದ್ರು.. ಹೋಗಿ ಕತ್ತಿ ಕಾಯಿ ಮತ್ತು ಶಗಣಿ ತಿನ್ನು... ಅವರಿಗೆ ಆ ಸಮಯದಾಗ ತೋಚಿದ ಬೈಗುಳ ಅದು ಅಂತ ನನಗ ಅನಸ್ತದ. ಮನೋದ್ವೇಗ ದಲ್ಲಿದ್ದಾಗ ಸಾಂಸ್ಕೃತಿಕ ಬೈಗುಳ‌ ಅಂದ್ರ "ಶಗಣಿ ತಿನ್ನು". ಏನ ಟಾಪಿಕ ಪಾ ಅಂದ್ರ್ಯಾ... ಖರೆ ಅದ. ನಾವು ಯಾವುದೇ ಕೆಲಸಾ ಇರಲಿ ನಪಾಸ ಯಾಕ ಆಗ್ತೀವಿ,? ನಾವು ಮಾಡು ಕೆಲಸಾ ಗಡಿಬಡಿ ಮಾಡಿ ಕೆಲಸಾ ಹಾಳ ಮಾಡ್ತಿವಿ, ಅದು ಹಾನಿಯನ್ನು ಉಂಟು ಮಾಡುತ್ತದೆ, ಇಲ್ಲಾ ಅಂದ್ರ ಮುಂದಿನ ಕೆಲಸ ತಡಾ ಆಗ್ತದ... ಹಿಂಗಾಗಿ ಹಿರಿಯರು ದಾನಾ ಕಾಯಿಲಿಕ್ಕೆ ಹೋಗ ಅಥವಾ ಕತ್ತಿ ಕಾಯಿ ಅಂತ ಬೈತಿದ್ರು... ಅದರ ಗೂಢ ಅರ್ಥ " ದನಾ ಅಥವಾ ಕತ್ತೆ" , ಪ್ರಾಣಿಯನ್ನ ಯಥಾವತ್ತಾಗಿ ತೆಗೆದುಕೊಂಡರೆ ಅವುಗಳಿಗೆ *ತಾಳ್ಮೆ* ಬಹಳ ಇರ್ತದ. ಸಮಾಧಾನವಾಗಿ ಅವುಗಳನ್ನ ಮೇಯಿಸ...

ಈ ದಿನದ ಪ್ರೇರಣೆ:

ಈ ದಿನದ ಪ್ರೇರಣೆ : ಒಂದು ಆನೆ ಮತ್ತು ನಾಯಿ ಒಂದೇ ಸಮಯಕ್ಕೆ ಗರ್ಭ ಧರಿಸಿದವು, 63 ದಿನ ಗತಿಸಿದವು, ನಾಯಿಯು 4 ಮುದ್ದಾದ ನಾಯಿ ಮರಿಗಳನ್ನು ಹಾಕಿತು, ಮತ್ತೆ ಕೆಲ ದಿನಗಳ ನಂತರ ಮತ್ತೆ ಗರ್ಭ ಧರಿಸಿತು ನಾಯಿ, ಮುಂದಿನ 63 ದಿನಗಳಿಗೆ ಮತ್ತೆ 4 ಮುದ್ದಾದ ನಾಯಿ ಮರಿಗಳನ್ನು ಹಾಕಿತು, ಹಾಗೆಯೇ ಒಟ್ಟು ೧ ಡಜನ್ ನಾಯಿ ಮರಿ ಹಾಕಿದ ನಾಯಿ ಮರಿ, ಆನೆಗೆ ಕೇಳಿತಂತೆ, "ನಾನು ಮತ್ತು ನೀನು ಒಂದೇ ಸಾರಿ ಗರ್ಭ ಧರಿಸಿದ್ದು ನಿಜವಲ್ಲವೇ, ಮೊದಲ ೪ ನಾಯಿಮರಿಗಳು ಆಗಲೇ ದೊಡ್ಡ ನಾಯಿಗಳಾಗಿ ಓಡಾಡತಾ ಇದಾವೆ, ನಿನ್ನದೇನು ಕತೆ? ಅಂತ ಕೇಳಿದಾಗ, ಆನೆ ಉತ್ತರಿಸಿತು: ಒಂದು ವಿಷಯ ಹೇಳ್ತೆನೆ ಗಮನಿಸು, ನಾನು ೨ ವರ್ಷಕ್ಕೊಮ್ಮೆ ಗರ್ಭ ಧರಿಸ್ತಿನಿ, ಆದರೆ ನಾಯಿಯನ್ನ ಹೆರೋದಿಲ್ಲ, ನಾನು ಆನೆಯನ್ನೆ ಹೆರುತ್ತೇನೆ, ಆ ಗರ್ಜನೆ ಆ ಪ್ರಕಾರವನ್ನು ನೋಡಲು ಜನರು ಸಾಲು ಸಾಲಾಗಿ ನಿಲ್ಲುತ್ತಾರೆ, ನಾವು ದಾರಿಯಲ್ಲಿ ಹೊರಟರೆ ಜನರು ಮೂಕ ವಿಸ್ಮಿತರಾಗಿ ನೋಡುತ್ತಾರೆ. ಹಾಗಾಗಿ ನಾನು ಹೆರುವುದು ಬೃಹತ್‌ ಮತ್ತು ತೂಕವಿರುವ ವ್ಯಕ್ತಿತ್ವವನ್ನು. ನಾಯಿಗೆ ಹೋಲಿಸ ಬೇಡ." ಗಮನಿಸಿದರಾ ಗೂಡಾರ್ಥವನ್ನು!, ೧. ಬೆರೆಯವರ ಪ್ರಾರ್ಥನೆ ಈಡೇರಿದಾಗ ನೀವು ಸಣ್ಣಾಗದಿರಿ, ೨. ಬೇರೆಯವರಿಗೆ ಬೆಕಾಗಿರುವುದು ಸಿಕ್ಕಿದ್ದಕ್ಕೆ ಹೊಟ್ಟೆ ಕಿಚ್ಚು ಬೇಡಾ, ೩. ಭಗವಂತನ ಸನ್ನಿಧಾನದಲ್ಲಿ ನಂಬಿಕೆ ಇಟ್ಟರೆ, ನಿಮ್ಮ ಕಾರ್ಯವನ್ನು ಜಗತ್ತೆ ಮೆಚ್ಚುತ್ತದೆ, ಮತ್ತು ಅದರ ಪರಿಣಾಮ ದೂರಗಾಮಿ ...