ಕಡು ಬಿಸಿಲಿನ ನಾಡಿನಲಿ ಗೋಚರಿಸಿದ ಗೋ-ಸ್ವರ್ಗ
ಕಡು ಬಿಸಿಲಿನ ನಾಡಿನಲಿ ಗೋಚರಿಸಿದ ಗೋ-ಸ್ವರ್ಗ -ಮಾಧವ ಗೋ-ಶಾಲೆ. ----------------------------- ಶ್ರೀ ಶರಣ ಬಸವೇಶ್ವರರ ತತ್ವದ ನಾಡಾದ ಕಲ್ಬುರ್ಗಿ, ಒಂದು ಪುಣ್ಯದ ನಗರಿ, ಶರಣರು ಹೇಳುವಂತೆ ಎಲ್ಲಿ ಗೋ-ಮಾತೆಗೆ ಗೌರವ ಸಿಗುತ್ತದೆ, ಯಾವ ಭೂ-ಭಾಗದ ಮೇಲೆ ಗೋವುಗಳು ವಾಸ ಮಾಡುತ್ತವೆಯೋ, ಆ ನಾಡು ಸ್ವರ್ಗಕ್ಕೆ ಸಮ ಎಂದು ಸಾರಿದ್ದಾರೆ. ಅಲ್ಲಿನ ಜನ ನೀವು ನಿಜವಾಗಿಯೂ ಧನ್ಯರು. ಕಾರಣ ಗೋ-ಸಂತತಿಯ ರಕ್ಷಣೆ ಮತ್ತು ಅಭಿವೃಧ್ಧಿ , ಎರಡೂ ಈ ನೆಲದ ಮೇಲೆ ಅವ್ಯಾಹತವಾಗಿ ನಡೆಯುತ್ತಿದೆ. ವೃಧ್ಧ, ಪೆಟ್ಟಾದ, ರೋಗದಿಂದ ಬಳಲಿದ, ಮನುಷ್ಯನ ದುರ್ಬುಧ್ಧಿಗೆ ತುತ್ತಾದ, ಮತ್ತು ಕಟುಕರ ಕೈಗೆ ಸಿಕ್ಕು ಸಾಯಬೇಕಾದ ಹಸುಗಳನ್ನು ರಕ್ಷಿಸಿ ಇಲ್ಲಿ ತಂದು ಬಿಡಲಾದ, ಗೋ-ಸಂತತಿಗಳ ಸಮಾಗಮವೇ "ಮಾಧವ ಗೋ-ಶಾಲೆ". ರಾಷ್ಟ್ರೀಯ ಸ್ವಯಂಸೇವಕ ಸಂಘದ ಮತ್ತು ಗ್ರಾಮದ ಗುರು ಹಿರಿಯರ ಮಾರ್ಗ ದರ್ಶನದಲ್ಲಿ ನಿರಂತರವಾಗಿ ನಿರ್ವಹಿಸುತ್ತಿರುವ ಏಕೈಕ ಗೋ-ಶಾಲೆ ಎಂದರೆ ತಪ್ಪಾಗಲಾರದು. ಗೋ-ಸಂತತಿಗೆ ಧಕ್ಕೆಯಾಗದ ಹಾಗೆ ಅವುಗಳಿಗೆ ವಾಸ ಸ್ಥಾನ, ಆಹಾರಕ್ಕೆ ಮೇವು, ಸತತವಾಗಿ ದೊರಕುವಂತೆ ನೋಡಿಕೊಳ್ಳುವ ಗೋ-ಸೇವಕರು, ಪಾಲಕರು ಸಾಮಾನ್ಯರಲ್ಲಿ ಅಸಮಾನ್ಯರು. ಶ್ರೀಯುತ ಮಹೇಶ ಬೀದರಕರ ರವರ ಉತ್ಸಾಹ, ನಿಜವಾಗಿಯೂ ಪ್ರೇರಣೆ ತುಂಬುವಂಥಹದು. "ಗಾವೋ ವಿಶ್ವಸ್ಯ ಮಾತರ:", ಎಂಬ ನುಡಿಯನ್ನು ಸಾಕಾರ ಗೊಳಿಸುತ್ತಿರುವ ಇವರ ತಂಡವನ್ನು ನೋಡಿದರೆ, ಅನೇಕ ನವ ಯು...